ಫ಼ೆಬ್ರವರಿ 2ರಿ೦ದ ಚಂದನದಲ್ಲಿ ರಾಮಾಯಣ ಯಕ್ಷಗಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಫೆಬ್ರವರಿ 1 , 2014
|
ಫ಼ೆಬ್ರವರಿ 1, 2014
|
ಫ಼ೆಬ್ರವರಿ 2ರಿ೦ದ ಚಂದನದಲ್ಲಿ ರಾಮಾಯಣ ಯಕ್ಷಗಾನ
ಉಡುಪಿ :
ತೆಂಕು - ಬಡಗುತಿಟ್ಟಿನ ಸುಮಾರು 200 ಕಲಾವಿದರು ಅಭಿನಯಿಸಿರುವ 'ಸಂಪೂರ್ಣ ರಾಮಾಯಣ' ಯಕ್ಷಗಾನ ಫೆ. 2ರಿಂದ ಬೆಂಗಳೂರು ದೂರದರ್ಶನದ 'ಚಂದನ' ವಾಹಿನಿಯಲ್ಲಿ ಪ್ರತಿ ಭಾನುವಾರ ಅಪರಾಹ್ನ 1.30ರಿಂದ 2.30ರ ವರೆಗೆ ಪ್ರಸಾರಗೊಳ್ಳಲಿದೆ. ನಾರಾಯಣ ಶಬರಾಯ ಅವರು ಯಕ್ಷ ಸಂಗೀತ ನಾದ ವೈಭವಂ ಕ್ರಿಯೇಶನ್ ಲಾಂಛನದಡಿಯಲ್ಲಿ ಸಂಪೂರ್ಣ ರಾಮಾಯಣ ಕಥಾನಕವನ್ನು ಕಿರುತೆರೆಗೆ ತರುತ್ತಿದ್ದಾರೆ.
ಅಯೋಧ್ಯೆಯ ದೊರೆ ದಶರಥನ ಒಡ್ಡೋಲಗದ ಸನ್ನಿವೇಶದೊಂದಿಗೆ ಕಥೆ ಆರಂಭವಾಗುತ್ತದೆ. ನಾರಾಯಣ ಶಬರಾಯ, ಕಡಬ ರಾಮಚಂದ್ರ ಹೆಗ್ಡೆ, ಶ್ರೀಧರ ಹೆಗಡೆ ಚಪ್ಪರಮನೆ, ಸಂತೋಷ್ ಕುಮಾರ್ ಕುಲಶೇಖರ ಸೇರಿದಂತೆ ಯಕ್ಷಲೋಕದ ಖ್ಯಾತನಾಮರು ಹಿಮ್ಮೇಳ ಹಾಗೂ ಮುಮ್ಮೇಳಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೃಪೆ :
http://www.kannada.yahoo.com
|
|
|